ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ದಕ್ಷಿಣ ಭಾರತದ ಹಾಗೂ ಕನ್ನಡದ ಪ್ರಪ್ರಥಮ ಅದ್ದೂರಿ ತಾರಾಗಣದ
ವೃಷಭಾದ್ರಿ ಪ್ರೋಡಕ್ಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಮುನಿರತ್ನ ಹದಿನೈದು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಠಾರಿವೀರ ಸುರಸುಂದರಾಂಗಿ ೩ಆ ಚಿತ್ರವು ಇದೇ ೧೦ ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಚಿತ್ರಕ್ಕೆ ಉಪೇಂದ್ರರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ವೇಣು ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ಚಿನ್ನಿ ಪ್ರಕಾಶ್ ನೃತ್ಯ, ಕಿರಣ್ ಕಲೆ, ಹರ್ಷ ಸಂಕಲನ, ರವಿವರ್ಮ ಸಾಹಸ, ಸುಂದರಂ, ಮಂಜಯ್ಯ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರವನ್ನು ಯಶಸ್ವಿ ನಿರ್ದೇಶಕ ಸುರೇಶ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ.
ತಾರಾಗಣದಲ್ಲಿ ಉಪೇಂದ್ರ, ಅಂಬರೀಶ್, ರಮ್ಯಾ, ಶ್ರೀಧರ್, ದೊಡ್ಡಣ್ಣ, ಸಂಗೀತಾ, ಟೆನ್ನಿಸ್ಕೃಷ್ಣ, ಚೇತನ್, ಸುಮನ್ ರಂಗನಾಥ್, ರಮಣಿತೋ ಚೌಧರಿ, ರಿಷಿಕಾಸಿಂಗ್ ಮುಂತಾದ ವರಿದ್ದು, ಜಯಕರ್ನಾಟಕ ಸಂಸ್ಥೆಯ ಮುಖ್ಯಸ್ಥ ಮುತ್ತಪ್ಪ ರೈ ಕೂಡಾ ಚಿತ್ರದಲ್ಲಿ ವಿಶಿಷ್ಠ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.